ಅರಿವಿನ ವಾಟೆ

ಬದುಕು ಬಂಡಿಹಬ್ಬ
ಹಂಗಿಸುವವ ಕೊರಡುರಾಶಿಗಳ ದಿಬ್ಬ

ಕಾಮ, ಕ್ರೋಧ, ಲೋಭ ಮೋಹ
ಮದ, ಮತ್ಸರಗಳು ಅರಿಗಳಲ್ಲ
ಅರಿತುಕೊಳ್ಳಲು ಆಯುಧಗಳು.
ನಿಮ್ಮ ಆತ್ಮಗಮನಕ್ಕೆ ಬದುಕಿಗೆ
ಕಾಮನೆಗಳಿಲ್ಲದಿರೆ ಕಾಡು ಈ ಮನೆ
ಕಾಮವೆಂದರೆ ವೃಷ್ಟಿ
ಸಂಕುಲ ಜೀವ ಸೃಷ್ಟಿ
ಮೋಹವೆಂಬುದು ಮಧುರ
ಬೇಡವೆಂದವ ಮರುಳ
ಕ್ರೋಧಕ್ಕೆ ಕೆಂಗಣ್ಣು ಯಾಕೆ?
ಬಿಸಿಗೆ ತಾನೆ ಕರಗುವುದು ತುಪ್ಪ.
ಲೋಭ ಲಾಭಬಲ
ಇರಲೇಳು ಬದುಕು ಅರ್ಥಬಲ ಸಬಲ
ಮದವಿದ್ದರೆ ಮೆರಗು
ಅದಕೆ ಬೇಡ ಮಂಥನ ಚಿಂತನ
ಒಣ ಹರಟೆ ಒಗರು.
ಮತ್ಸರವ ಮರೆಯದೆ
ಸವಿದು ನೋಡ ಮಿತಿಯಲಿ
ಷಡ್ವರ್ಗಗಳ ಸಹಜತೆಯ ಅಂಕೆಯಲಿ
ಬದುಕು ಅಮೃತದ ವಾಟೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಳೆದು ತಾ ನನ್ನನ್ನು
Next post ವ್ಯಸನಕೋಣೆ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys